Saturday, May 6, 2017

ದುಡ್ಡು ಉಳಿಸುವುದು ಹೇಗೆ ? ೬ ಪ್ರಯೋಗಕಾರಿ ಸಲಹೆಗಳು



ನಾವೆಲ್ಲರೂ ದಿನಾಲೂ ದುಂದುವೆಚ್ಚ ಮಾಡ್ತಿರ್ತೀವಿ , ಅದರ ಜೊತೆಗೆ ನಮೆಗೆಲ್ಲ ದುಡ್ಡುಉಳಿಸಬೇಕು ಅಂತ ಅನ್ನಿಸುತ್ತಿರುತ್ತದೆ . ಆದೆರೆ ಏನಾದ್ರು ಮಾಡಿ ನಾವು ನಮ್ಮ ಹತ್ತಿರ ಇರುವ ಹಣವನ್ನ ಖರ್ಚು ಮಾಡಿ ಬಿಡ್ತಿವಿ. ಮಂತ್ ಎಂಡ್ ಅಲ್ಲಿ ಬ್ಯಾಂಕ್ ಅಕೌಂಟ್ ಅಲ್ಲಿ ೧೦೦-೫೦೦ ರೂ ಉಳಿದಿರುತ್ತದೆ. ಮತ್ತೆ ಮುಂದಿನ ತಿಂಗಳು ಉಳಿಸೋಣ ಅನ್ಕೊಂಡು ಸುಮ್ಮನಾಗ್ತಿವಿ. ನಾವು ದುಡ್ಡು ಉಳಿಸೋಕೆ ಏನೇ ಪ್ರಯತ್ನ ಮಾಡಿದ್ರು ನಾವು ಉಲಿಸ್ಕ್ ಆಗ್ತಿರೋಲ್ಲ. ಹಾಗಾದ್ರೆ ಬನ್ನಿ ದುಡ್ಡು ಹೇಗ್ ಉಳಿಸೋದು ಅನ್ನೋದನ್ನ ತಿಳಿಯೋಣ.


) ಸೇವಿಂಗ್ಸ್ ಅಕೌಂಟ್
ಮೊದಲು ನಾವೆಲ್ಲ ಮಾಡಬೇಕಾದ ಕೆಲಸ , ನಮಗೆಲ್ಲ salary ಅಕೌಂಟ್ ಇರುತ್ತೆ, ಅದರ ಜೊತೆಗೆ ಇನ್ನೊಂದು ಅಕೌಂಟ್ ಮಾಡಿಸಬೇಕು. ಸೇವಿಂಗ್ಸ್ ಅಕೌಂಟ್ ಮಾಡಿಸ್ಕೊಂಡು ಸ್ಯಾಲರಿ ಬಂದ ತಕ್ಷಣ ಆದಷ್ಟು ಹಣ ಆ ಅಕೌಂಟ್ಗೆ ಟ್ರಾನ್ಸ್ಫರ್ ಮಾಡಿ ಬಿಡ್ಬೇಕು. ೨೦,೦೦೦ ಸ್ಯಾಲರಿ ಇದ್ದಾರೆ ೫೦೦೦ ಆದ್ರೂ ಟ್ರಾನ್ಸ್ಫರ್ ಮಾಡಿ. ಉಳಿದ ಹಣದಲ್ಲಿ ಮಂತ್ ನಿಭಾಯಿಸೋಕೆ ಟ್ರೈ ಮಾಡಬೇಕು. ಮೊದಲು ಉಳಿಸಿ ಆಮೇಲೆ ನಮ್ಮ ಖರ್ಚು ಮಾಡಬೇಕು.ಕೆಲವು ಬ್ಯಾಂಕ್ ಒಳ್ಳೆಯ ಬಡ್ಡಿ ಕೂಡ ಕೊಡ್ತಾರೆ.

) ಮೊದಲು ಉಳಿಸಿ ಆಮೇಲೆ ಖರ್ಚು ಮಾಡಿ
ನಾವು ಆಮೇಲೆ ಹೇಗೆ ದುಡ್ಡು ಖರ್ಚು ಮಾಡ್ತೀವಿ ಅಂತ ತಿಳ್ಕೊಬೇಕು ಆಮೇಲೆ ನಮಗೆ ಎಲ್ಲಿ ಅದನ್ನ ತಡೀಬೇಕು ಅಂತ ಗೊತ್ತಾಗುತ್ತೆ. ಈವಾಗ ನಾವು ದಿನಾಲೂ ಆಫೀಸ್ ಗೆ ಹೋಗ್ಬೇಕಾದ್ರೆ ತಿಂಡಿ ತಿನ್ಕೊಂಡು ಹೋಗ್ತಿವಿ. ಅದನ್ನ ಆದಷ್ಟು ಮನೇಲಿ ಮಾಡಬೇಕು.




) ಆನ್ಲೈನ್ ಶಾಪಿಂಗ್ ಬೇಡ
ಆನ್ಲೈನ್ ಅಲ್ಲಿ ಅದು ಇದು ಆಫರ್ಸ್ ಬರ್ತಿರುತ್ತೆ. ನಾವು ಅದಕ್ಕೆ ಗಮನ ಕೊಡ್ಬಾರ್ದು. ೧೦% ೧೫ % ಡಿಸ್ಕೌಂಟ್ ಇರುತ್ತೆ ಅಂತ purchase ಮಾಡಿದ್ರೆ ಅವಾಗ ನಮ್ಮ ಹಣ ದುಂದು ವೆಚ್ಚ ಆಗುತ್ತೆ. ನಮಗೆ ಯಾವಾಗ ಅವಶ್ಯಕತೆ ಇದೆ ಆವಾಗ್ಲೇ ನಾವು purchase ಮಾಡಬೇಕು.



) ಶಾಪಿಂಗ್ ಗಿಂತ ಮುಂಚೆ
ಶಾಪಿಂಗ್ ಹೋಗೋ ಮುಂಚೆ ಒಂದು ಲಿಸ್ಟ್ ಮಾಡ್ಕೊಂಡು ಹೋಗಿ. ಅದು ನಮ್ಮ ಬಜೆಟ್ ಗೆ ಸರಿ ಹೋಗೋತರ ಇರ್ಬೇಕು. ಶಾಪಿಂಗ್ ಮಾಡ್ಬೇಕಾದ್ರೆ ಅಷ್ಟೇ ತರ್ಬೇಕು. ಅದಕ್ಕಿಂಗ್ ಜಾಸ್ತಿ ಟ್ಯಾರೊ ಯೋಚನೆ ಮಾಡ್ಬೇಡಿ.



) ಪಾರ್ಟಿ ಮನೇಲಿ ಕೊಡಿ
ಪಾರ್ಟಿ ಹೊರಗಡೆ ಮಾಡೋದ್ರಿಂದ ಜಾಸ್ತಿ ಹಣ ಖರ್ಚು ಆಗುತ್ತೆ. ನಿಮ್ಮ ಸ್ನೇಹಿತರನ್ನು ಮನೆಗೆ ಕರೆದು ಪಾರ್ಟಿ ಕೊಡಿ. ಇದರಿಂದ ಜಾಸ್ತಿ ಹಣ ಉಳಿಯುತ್ತದೆ.


) ಮೋಜು ಮಸ್ತಿಗೆ ಜಾಸ್ತಿ ದುಡ್ಡು ಖರ್ಚು ಮಾಡೋದು ತಡೆಯಿರಿ
ಮೂವಿ, ಎಂಟರ್ಟೈನ್ಮೆಂಟ್,ಕ್ರಿಕೆಟ್, ಶೋ, ಗಳಿಗೆ ಹೋಗಿ ಹಣ ಖರ್ಚು ಮಾಡೋದು ಬೇಡ. ಆದಷ್ಟು ಅದರಿಂದ ದೂರ ಇರ್ಬೇಕು. ಮನೇಲಿ ಪುಸ್ತಕ ಓದುವುದರ ಹವ್ಯಾಸ ಬೆಳೆಸಿಕೊಳ್ಳಿ. ಇದು ಒಂದು ಒಳ್ಳೆ ಅಭ್ಯಾಸ.



ಇನ್ನು ಬೇಕಾದಷ್ಟು ದಾರಿ ಇದೆ ದುಡ್ಡು ಉಳಿಸಲು ಆದ್ರೆ ನಾವು ಮನಸು ಮಾಡಬೇಕು. ಮೊದಲು ಈ ೬ ದಾರಿ ಹಿಂಬಾಲಿಸಿ. ನಿಮಗೆ ದುಡ್ಡು ಉಳಿಸೋಕೆ ಸಹಾಯ ಆದ್ರೆ ನಂಗೊಂದು ಕಾಮೆಂಟ್ ಮಾಡಿ ತಿಳಿಸಿ

Friday, May 5, 2017

ನೀರು.. ನೀರು... ನೀರು

ನೀರು.. ನೀರು... ನೀರು

ಪ್ರತಿಯೊಂದು ಪ್ರಾಣಿ ಪಕ್ಷಿಗಳಿಗೂ ನೀರೇ ಆಧಾರ, ನೀರಿಲ್ಲ ಅಂದ್ರೆ ಬದುಕುವುದು ಎಷ್ಟು ಕಷ್ಟ ಅಂದ್ರೆ ಅದನ್ನ ಹೇಳೋಕೆ ಆಗಲ್ಲ ಅಂತ ಎಲ್ಲರಿಗು ಗೊತ್ತು. ಆದ್ರೆ ಯಾರು ನೀರು ಹಾಳಾಗೋದನ್ನ, ಚೆಲ್ಲೋದನ್ನ, ಅನಾವಶ್ಯಕ ಬಳಕೆ ನಿಲ್ಲಿಸೋದು ಹೇಗೆ ಅನ್ನೋದನ್ನ ಜನರಿಗೆ ಮುಟ್ಟುವ ಹಾಗೆ ಹೇಳ್ತಾ ಇಲ್ಲ.


ನಾವು ಪ್ರತಿ ದಿನ ಬೆಳಿಗ್ಗೆಯಿಂದ ಸಾಯಂಕಾಲ ಮಲ್ಕೋಳೊ ವರೆಗೂ ಎಲ್ಲೆಲ್ಲಿ ನೀರು ಬಳಸ್ತೀವಿ ! ಹೇಗೆ ನೀರನ್ನ ನಾವು ಸಂರಕ್ಷಿಸ ಬೇಕು ಉಳಿಸ್ಬೇಕು ! ಅನ್ನೋದನ್ನ ನಾನು ಇಲ್ಲಿ ಹೇಳೋಕೆ ಪ್ರಯತ್ನಿಸ್ತಿನಿ.

ಇತ್ತೀಚಿಗೆ ಜನರು ಪ್ರತಿ ಮನೆಗೂ ಬೊಲೆವೆಲ್ ಹಾಕಿ ನೀರು ಪಡೆಯೋ ಪ್ರಯತ್ನ ಮಾಡ್ತಾರೆ ಮತ್ತು ಮಾಡ್ತಿದಾರೆ. ಇದರಿಂದ್ ಪ್ರತಿ ೩೦* ೪೦ ಜಗದಲ್ಲಿ ಒಂದು ಬೋರ್ ಹಾಕಿಸಿದ ಹಾಗೆ ಆಗುತ್ತೆ. ನೀರಿನ ಮಟ್ಟ ಕಡಿಮೆ ಇದೆ ಅಂತ ಗೊತ್ತಾದ್ರೆ ಇನ್ನೊಂದು ಬೋರ್ಅ ಹೊಡಿಸ್ತ್ಸರೇ. ಆವಾಗ ಭೂಮಿ ಅಲ್ಲಿರೋ ನೀರು ಮತ್ತೆ ಭೊಕೊರೆತ ಉಂಟಾಗುತ್ತೆ . ಭೂಮಿ ಒಳಗೆ ರಂದ್ರಗಳು ಅಗೋದ್ರಿಂದ ಭೂಮಿ ಟೊಳ್ಳಾಗುತ್ತೆ , ಮತ್ತೆ ಅದು ಸಮತೋಲನ ಕಳೆದು ಕೊಲ್ಲುತ್ತೆ.
  


ಹಾಗೆ ನಾವು ಮನೆ ಕಟ್ಟಿಸುವಾಗ ಮಳೆ ನೀರು ಕೊಯ್ಲ ಅಳವಡಿಕೆ ಮಾಡಿಸ್ಕೊಬೇಕು . ಮತ್ತೆ ಆದಷ್ಟು ಬೋರೆವೆಲ್ ಕಡಿಮೆ ಬಳೆಸಬೇಕು. ಇದರಿಂದ ನಾವು ಬೊಲೆವೆಲ್ಗಳ ಬಳಕೆ ಕಡಿಮೆ ಆಗಿತ್ತೇ , ಮನೆಗೆ ಬೋರ್ ಹಾಕಿಸೋದು ತಪ್ಪುತ್ತೆ.


ಮನೆಯಲ್ಲಿರೋ ಎಲ್ಲ ನಲ್ಲಿಗಳನು ಸರಿಯಾಗಿ ಚೆಕ್ ಮಾಡಿ ಹಾಕಿಸಬೇಕು. ನಲ್ಲಿಸೋರಿಕೆ ಇಂದ ತುಂಬಾ ನೀರು ಹರಿದು ಹೋಗುತ್ತೆ .
ಮರ ಗಿಡಗಲ್ಲ ಬೆಳೆಸ ಬೇಕು. ಮರ ಕಡಿಯೋದನ್ನ ನಿಲ್ಲಿಸಬೇಕು
ನೀರು ಮರಳಿ ಬಳಕೆ ಮಾಡೋದನ್ನ ನಾವೆಲ್ಲರೂ ಪ್ರಯತ್ನಿಸಬೇಕು
ಮಕ್ಕಳಿಗೆ ನೀರಿನ ಸಂರಕ್ಷಣೆ ಹೇಗೆ ಮಾಡುವು ಎಂದು ಹೇಳಿ ಕೊಡ್ಬೇಕು, ಯಾಕೆಂದರೆ ಅವರೇ ನಮ್ಮ ಮುಂದಿನ ಪೀಳಿಗೆ, ಅವರಿಗೆ ನೀರಿನ ಅನಾನುಕೂಲ ಆಗಬಾರದೆಂದೇ ನಾವೆಲ್ಲ ಇಷ್ಟೊಂದು ಕ್ರಮ ತಗೆದು ಕೊಳ್ಳಬೇಕು.
ಇದು ನನ್ನ ಮೊದಲ ಬರಹ ಆಗಿರುತ್ತದೆ, ಏನಾದ್ರು ತಪ್ಪಾಗಿದ್ರೆ ದಯಮಾಡಿ ಅದನ್ನ ಹೊನಲು ತಂಡದವರು ತಿದ್ದಿ  ಇದನ್ನ ಪಬ್ಲಿಶ್ ಮಾಡಿ ಅಂತ ತಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ.

ಧನ್ಯವಾದಗಳು

This is my first blog. Please let me know any changes I need to do Or If it has any mistakes please correct it . thank you


Sachin kokane
Twitter:  @BelagaviKunda
Sachinkk24@gmail.com



Wednesday, May 3, 2017

ಟೆಕ್ನಾಲಜಿ ಅಂತ್ಯವಾದಾಗ !! ಏನೆಲ್ಲಾ ಆಗಬಹುದು ?

ಟೆಕ್ನಾಲಜಿ ಅಂತ್ಯವಾದಾಗ !! ಏನೆಲ್ಲಾ ಆಗಬಹುದು ?



ಬೆಳಿಗ್ಗೆ ಎದ್ದು ನಾನು ದಿನನಿತ್ಯದಂತೆ ಮೊಬೈಲ್ ನೋಡಿದೆ ಅದು ಆಫ್ ಆಗಿತ್ತು , ನಾನೆಲ್ಲೋ ಸ್ವಿಚ್ ಆಫ್ ಆಗಿರ್ಬೇಕು ಅಂತ ಚಾರ್ಜ್ ಹಾಕಿದೆ, ಕರೆಂಟ್ ಇರಲಿಲ್ಲ, ಏನಿವತ್ತು ಕರೆಂಟ್ ಇಲ್ವಾ ಅಂತ ನನ್ನ ಬ್ಯಾಗ್ ಒಳಗೆ ಇದ್ದ ಪವರ್ ಬ್ಯಾಂಕ್ ತಗೆದು ಡೇಟಾ ಕೇಬಲ್ ಇಂದ ಅದಕ್ಕೆ ಮೊಬೈಲ್ ಸ್ವಿಚ್ ಮಾಡಿದೆ. ಆದ್ರೂ ಅದು ಆಫ್ ಇತ್ತು, ನಿನ್ನೆ ಫುಲ್ ಚಾರ್ಜ್ ಇದ್ದ ಪವರ್ ಬ್ಯಾಂಕ್ ಇವತ್ತು ಹೇಗ್ ಆಫ್ ಆಯಿತು ಅನ್ನೋದು ನಂಗೆ ತೋಚಲೇ ಇಲ್ಲ. ನಾನು ಎದ್ದು ಲ್ಯಾಪ್ಟಾಪ್ ಆನ್ ಮಾಡಿದೆ ಅದು ಆನ್ ಆಗಲಿಲ್ಲ.ಏನ್ ಕರ್ಮಾ ಇದು ನೈಟ್ ಎಲ್ಲ ಚಾರ್ಜ್ ಗೆ ಹಾಕಿದ್ದೆ, ಆದ್ರೂ ಚಾರ್ಜ್ ಆಗಿಲ್ವ ಅನ್ಕೊಂಡು ಮುಚ್ಚಿಟ್ಟೆ . ಏನಾಗ್ತಿದೆ ಅಂತ ನೋಡೋಕೆ ಲ್ಯಾಂಡ್ ಲೈನ್ ತಗೊಂಡು ಕಾಲ್ ಮಾಡೋಕೆ ಹೋದೆ. ರಿಸೀವರ್ ಕಿವಿಗೆ ಹಿಡಿದ್ರೆ ಯಾವ್ ಶಬ್ದಾನು ಕೇಳಿಸಲೇ ಇಲ್ಲ.




ಏನೋ ಪ್ರಾಬ್ಲಮ್ ಇರ್ಬೇಕು ಅಂತ ಹೊರಗಡೆ ಬಂದು ನೋಡಿದೆ ಯಾರು ಇರಲಿಲ್ಲ. ಎಲ್ಲರು ಎಲ್ಲೋದ್ರು ಅನ್ಕೊಂಡು ಮನೇಲಿ ಹೋಗಿ ಬಾಗಿಲು ಹಾಕೊಂಡು ಸ್ನಾನ ಮಾಡಿ ಬಂದೆ. ಇನ್ನು ಕರೆಂಟ್ ಬಂದಿರ್ಲಿಲ್ಲ. ಪೇಪರ್ ಆದ್ರೂ ಬಂದಿದೆಯಾ ಅಂತ ನೋಡಿದ್ರೆ ಅದು ಬಂದಿತ್ತು.ಅದರಲ್ಲಿ ಕರೆಂಟ್ ವಿಷಯ ಯಾವುದು ಬರೆದಿರಲಿಲ್ಲ . ಏನೋ ಇರ್ಬೇಕು ಯಾರ್ನಾದ್ರು ಕೇಳೋಣ ಅಂತ ಪಕ್ಕದ ಮನೆಗೆ ಹೋಗಿ ಬೆಲ್ ಮಾಡಿದೆ. ಬೆಲ್ ರಿಂಗ್ ಆಗಲೇ ಇಲ್ಲ. ನಾನು ಮೊದಲು ತಿಂಡಿ ಆಮೇಲೆ ನೋಡಿದ್ರೆ ಆಯಿತು ಅಂತ ಅಲ್ಲಿಂದ ಬಂದೆ. ಸ್ವಲ್ಪ ದೂರ ಹೋದಮೇಲೆ ಜೇಬಿನಲ್ಲಿ ದುಡ್ಡಿಲ್ಲ ಎಂದು ಗೊತ್ತಾಯ್ತು. ಏಟಿಎಂ ಗೆ ಹೋಗಿ ದುಡ್ಡು ತಗೊಂಡ್ರೆ ಆಯಿತು ಅಂತ ಏಟಿಎಂ ಕಡೆಗೆ ಬಂದೆ. ಅಲ್ಲಿ ಏಟಿಎಂ ಔಟ್ ಆಪ್ ಸರ್ವಿಸ್ ಅಂತ ಬೋರ್ಡ್ ಇತ್ತು. ಎಲ್ಲರು ಏನು ತೋಚದಂತೆ ಒದ್ದಾಡ್ತಿದ್ರು. ಏನು ಅಂತ ಅಲ್ಲೇ ಕುತ್ ಒಬ್ಬನನ್ನು ವಿಚಾರಿಸಿದೆ. ಏನಾಗಿದೆ ಎಂದು? ಅವನು ಹೇಳಿದ: ಸರ್ ಎಲ್ಲೂ ಕರೆಂಟ್ ಇಲ್ಲಾ. ಏಟಿಎಂ, ಟಿವಿ, ರೇಡಿಯೋ,ಫೋನ್,ಏನು ವರ್ಕ್ ಆಗ್ತಿಲ್ಲ. ಜನರು ಏನ್ ಮಾಡೋದು ಅಂತ ತೋಚದೆ ಆಕಡೆ ಈಕಡೆ ಓಡಾಡ್ತಿದಾರೆ..



ನಂಗೆ ಹುಚ್ಚು ಹಿಡದ ಹಾಗೆ ಆಯಿತು.. ಇವಗೇನ್ ಮಾಡೋದು, ಬ್ಯಾಂಕ್ ಅಲ್ಲಿ ಹೋದ್ರೆ ಯಾವ್ ಕಂಪ್ಯೂಟರ್ ವರ್ಕ್ ಆಗಲ್ಲ... ಅವರು ದುಡ್ಡು ಕೊಡಲ್ಲ.. ಈವಾಗ ದುಡ್ಡು ಇಲ್ಲದೆ ಯಾರು ಏನು ಕೊಡಲ್ಲ.... ಎಲ್ಲ ಡೀಟೇಲ್ಸ್ ನಾವು ಡಿಜಿಟಲೈಜೆಷನ್ ಮಾಡಿ ಇಟ್ಟಿದೀವಿ. ಟೆಕ್ನಾಲಜಿ ಇಲ್ಲಾ ಅಂದ್ರೆ ಏನು ಮಾಡೋಕೆ ಆಗಲ್ಲ. ಇದರಿಂದ ಹೊರಗೆ ಬರೋಕೆ ಇನ್ನು ಕೆಲವು ವರುಷಗಳೇ ಬೇಕು..

ಎಲ್ಲಿ ಏನ್ ಆಯಿತು?ಯಾಕೆ ಹೀಗ್ ಆಯಿತು ಅಂತ ನೋಡೋಕೆ ಟಿವಿ ಇಲ್ಲ, ನ್ಯೂಸ್ ಏನು ಗೊತ್ತಾಗ್ತಗ್ಲಿಲ್ಲ. ಆದ್ರೆ ಹೇಗೋ ಕರೆಂಟ್ ಬಂತು. ಎಲ್ಲರು ಏಟಿಎಂ ಕಡೆಗೆ ಮನೆ ಕಡೆಗೆ ಬ್ಯಾಂಕ್ ಗೆ ಓಡಿ ಹೋದ್ರು . ಆದ್ರೆ ಅಲ್ಲಿ ಏಟಿಎಂ ವರ್ಕ್ ಆಗ್ಲೇ ಇಲ್ಲಾ, ಟಿವಿ ಆನ್ ಆಗ್ಲೇ ಇಲ್ಲಾ. ಯಾವುದೇ ಟೆಕ್ನಾಲಜಿ ಗ್ಯಾಜೆಟ್ ಇಲೆಕ್ಟ್ರಾನಿಕ್ ವಸ್ತು ಆನ್ ಆಗ್ಲೇ ಇಲ್ಲಾ.. ಏನು ಅಂತ ಯಾರಿಗೂ ಗೊತ್ತೇ ಆಗ್ತಿರ್ಲಿಲ್ಲ.




ಮುಂದಿನ ಭಾಗ್ ಶೀಘ್ರದಲ್ಲೇ ……………….

Sunday, April 23, 2017

ದಕ್ಷಿಣ ಭಾರತ ರಾಜ್ಯಗಳ ಮೇಲೆ ಹಿಂದಿ ಹೇರಿಕೆ !

ದಕ್ಷಿಣ ಭಾರತ ರಾಜ್ಯಗಳ ಮೇಲೆ ಹಿಂದಿ ಹೇರಿಕೆ !


ಇತ್ತೀಚಿನ ದಿನಗಳಲ್ಲಿ ನಾವು ನೋಡ್ತಾನೆ ಇದೀವಿ , ಉತ್ತರ ಭಾರತದ ಬಿ ಜೆ ಪಿ ಸರಕಾರ ಹಿಂದಿ ಹೇರಿಕೆ ಮಾಡ್ತಾ ಇದಾರೆ ಅಂತ ಜನ ಸಾಮಾಜಿಕ ಜಾಲತಾಣಗಳಲ್ಲಿ ಹೇಳ್ಲಗುತ್ತಿದೆ . ಮೊದಲು NH ( ರಾಷ್ಟ್ರೀಯ ಹೆದ್ದಾರಿಗಳ ಮೇಲೆ ) ಮೈಲಿ ಗಲ್ಲುಗಳ ಮೇಲೆ ಹಿಂದಿ ಬರೆಯುವಂತೆ ಆದೇಶ ಹೊರಡಿಸಿದ್ರು. ಕರ್ನಾಟಕದ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಮೈಲಿಗಲ್ಲು ಮೇಲೆ ಹಿಂದಿ ಮತ್ತು ಇಂಗ್ಲಿಷ್ ಬರೆಯಲಾಯಿತು. ಕನ್ನಡ ಅಳೆಸಿ ಹಿಂದಿ ಬರೆದಿದ್ದು ಕನ್ನಡಿಗರಿಗೆ ಇಷ್ಟ ಆಗ್ಲೇ ಇಲ್ಲ. ಅಷ್ಟೇ ಯಾಕೆ ತಮಿಳು ಮಲಯಾಳಂ ಅಂದ್ರ ಜನರಿಗೂ ಕೂಡ ಇದು ನಮ್ಮ ಮೇಲೆ ಹೇರಿಕೆ ಆಗುತ್ತಿದೆ ಅಂತ ತಿರಸ್ಕರಿಸಿದ್ರು.




























ಹಿಂದಿ ಏನು ರಾಷ್ಟ್ರ ಭಾಷೆ ಅಲ್ಲ, ನಾವೂ ಯಾಕೆ ಅದನ್ನು ಕಲಿಬೇಕು, ನಮಗೆ ನಮ್ಮ ರಾಜ್ಯದಲ್ಲಿ ನಮ್ಮ ಭಾಷೆ ಇರಲಿ ಅಂತ ಜನ ಅಭಿಯಾನ ಶುರು ಮಾಡಿದ್ರು. ನಮ್ಮ ಜನರು ಕನ್ನಡ ಬಲ್ಲವರು ಹಿಂದಿ ನಮಗೆ ಗೊತ್ತಿಲ್ಲ . ಇಲ್ಲಿನ ಆಡಳಿತ ಭಾಷೆಯಲ್ಲಿ ಬರೆಯಲಿ, ಅದರ ಜೊತೆಗೆ ಇಂಗ್ಲಿಷ್ ಅಲ್ಲಿ ಬರೆಯಲಿ. ಹಿಂದಿ ಬೇಡವೇ ಬೇಡ ಎಂದು ವಾದ ಮಾಡಿದ್ರು. ಪಕ್ಕದ ರಾಜ್ಯದ ಜನರು ಹಾಗೆ ಹಿಂದಿ ಬೇಡವೇ ಬೇಡ , ನಾವ್ಯಾಕೆ ಹಿಂದಿ ಕಲಿಬೇಕು ಅದರ ಅವಶ್ಯಕತೆ ಇಲ್ಲ ಅಂತ ಹೇಳಿದ್ರು. ಇನ್ನು ಕೆಲೆವೆಡೆ ಮೈಲಿಗಲ್ಲು ಮೇಲೆ ಬರೆದ ಹಿಂದಿ ಅಳಿಸಿ ತಮ್ಮ ಭಾಷೆಯಲ್ಲಿ ಬರೆಯಲಾಯಿತು.













ಆದರೆ ರಾಜ್ಯ ಸರಕಾರ ಇದರ ಬಗ್ಗೆ ಮಾತನಾಡಲೇ ಇಲ್ಲ, ಟ್ವಿಟ್ಟರ್ ಫೇಸ್ಬುಕ್ ಅಲ್ಲಿ ತಮ್ಮ ತಮ್ಮ ಊರಿನಲ್ಲಿ ಹಿಂದಿ ಅಳೆಸಿ ತಮ್ಮ ಭಾಷೆ ಬರೆದು ಫೋಟೋ ಕ್ಲಿಕ್ ಮಾಡಿ ಹಾಕಿದ್ರು.


ಹಿಂದಿ ಹೇರಿಕೆ ಇಲ್ಲಿಗೆ ನಿಲ್ಲಲಿಲ್ಲ, ಬಿಜೆಪಿ ನಾಯಕರು ಹಿಂದಿ ಕಡ್ಡಾಯವಾಗಿ ೧ ರಿಂದ ೮ ನೇ ತರಗತಿ ವರೆಗೆ ದೇಶದಾದ್ಯಂತ ಶಾಲೆಗಳಲ್ಲಿ ಮಾಡಬೇಕು ಅಂತ ಮನವಿ ಮಾಡಿಕೊಂಡ್ರು. ಬಿಜೆಪಿ ನಾಯಕರು ಶ್ರೀ ಅಶ್ವಿನ್ ಕುಮಾರ್ ಉಪಾಧ್ಯಾಯ್ ಅವರು ಸಲ್ಲಿಸಿದ್ PIL ಗೆ ಸುಪ್ರಿಲ್ ಕೋರ್ಟ್ ಅಸ್ತು ಎಂದಿದೆ . ಈವಾಗ ಎಲ್ಲ ರಾಜ್ಯಗಳಲ್ಲೂ ಹಿಂದಿ ಕಡ್ಡಾಯ. ಎಲ್ಲ ಮಕ್ಕಳಿಗೂ ಕಲಿಸಲೇ ಬೇಕು. ಆರ್ಟಿಕಲ್ ೩೪೩ ಯ ಪ್ರಕಾರ ಎಲ್ಲ ರಾಜ್ಯದಲ್ಲೂ ೧ ರಿಂದ ೮ ತರಗತಿ ವರೆಗೂ ಹಿಂದಿ ಕಡ್ಡಾಯ.


ಆದರೆ ಕನ್ನಡಿಗರ ವಾದ ನಾವು ಯಾಕೆ ಹಿಂದಿ ಕಲಿಬೇಕು, ಅವರು ನಮ್ಮ ದಕ್ಷಿಣ ಭಾರತದ ಭಾಷೆ ಕಲಿತಾರ ? ಕನ್ನಡ ತೆಲುಗು ತಮಿಳ್ ಮಲಯಾಳಂ ಅವರಿಗೆ ಬರುತ್ತಾ? ನಾವು ಯಾಕೆ ನಮ್ಮ ಮಾತೃ ಬಿಟ್ಟು ಬೇರೆ ಭಾಷೆ ಕಲಿಬೇಕು.? ಅಂತ ವಾದ ಮಾಡಿದ್ರು. ಟ್ವೀಟ್ ಮಾಡಿದ್ರು.ಆದರೆ ಇದಕ್ಕೆ ಸರಕಾರ ತಲೆ ಕೆಡಿಸಿಕೊಂಡಿಲ್ಲ, ನಾವು ಏನ್ ಮಾಡೋದು ನಮಗೆ ಗೊತ್ತು ಅನ್ನೋತರ ಅವರು ಇದ್ದಾರೆ. ಹಿಂದಿ ದೇಶದಲ್ಲಿ ಮುಖ್ಯ ಭಾಷೆ ಆಗ್ಲಿ ಅದರಿಂದ ನಾವೆಲ್ಲ ಒಂದಾಗಿ ಬಾಳೋಕೆ ಸರಳ ಅಂತ ಅವರ ಅನಿಸಿಕೆ.





click here

Contact

Sachin kokane
9844495929
sachinkk24@gmail.com

Header Ads